CM of Karnataka Profile Banner
CM of Karnataka Profile
CM of Karnataka

@CMofKarnataka

1,612,064
Followers
163
Following
13,612
Media
20,516
Statuses

Official Page of the Chief Minister's Office, Karnataka

Bengaluru, Karnataka
Joined August 2014
Don't wanna be here? Send us removal request.
@CMofKarnataka
CM of Karnataka
7 days
ವಿಶ್ವ ಭೂ ದಿನ ಸಕಲ ಕೋಟಿ ಜೀವರಾಶಿಗಳಿಗೆ ಆಶ್ರಯ ನೀಡಿರುವ ನಮ್ಮ ಭೂಮಿಯನ್ನು ಕಲುಷಿತಗೊಳಿಸದೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. #worldearthday2024
Tweet media one
13
7
97
@CMofKarnataka
CM of Karnataka
19 days
ನಾಡಿನ ಸಮಸ್ತ ಜನತೆಗೆ ಈದ್ ಉಲ್ ಫಿತ್ರ್ ಹಬ್ಬದ ಶುಭಾಶಯಗಳು #Eid2024 #EidMubarak #Eidmubarak2024
Tweet media one
58
44
582
@CMofKarnataka
CM of Karnataka
20 days
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು ಬೇವು- ಬೆಲ್ಲವನ್ನು ಸವಿಯಿರಿ. ಸುಖ- ದುಃಖಗಳನ್ನು ಸಮನಾಗಿ ಸ್ವೀಕರಿಸಿ. #HappyUgadi #Ugadi #UgadiFestival #Ugadiwishes #UgadiSpecial #happyugadi2024
Tweet media one
32
22
257
@CMofKarnataka
CM of Karnataka
22 days
2024ನೇ ಸಾಲಿನ ವಿಶ್ವ ಆರೋಗ್ಯ ದಿನದ ಧ್ಯೇಯ ವಾಕ್ಯ 'ನನ್ನ ಆರೋಗ್ಯ ನನ್ನ ಹಕ್ಕು' ಎಂಬುದು. ಆರೋಗ್ಯ ಪಡೆಯುವ ಹಕ್ಕು ಎಲ್ಲರಿಗೂ ಇದೆ. ಚಿಕಿತ್ಸೆಗಿಂತ ರೋಗ ಬಾರದಂತೆ ಎಚ್ಚರಿಕೆ ವಹಿಸುವುದು ಉತ್ತಮ. #worldhealthday
Tweet media one
11
11
120
@CMofKarnataka
CM of Karnataka
24 days
*ಜಾತಿ ಒಂದು ದೇಶವನ್ನು ವಿಕಾರಗೊಂಡ ಬೌದ್ಧಿಕ ಶೂನ್ಯವನ್ನಾಗಿ ಮಾಡಿರುವುದಕ್ಕೆ ಭಾರತವೇ ಉದಾಹರಣೆ* -ಡಾ.ರಾಮಮನೋಹರ ಲೋಹಿಯಾ #Rammanoharalohia
Tweet media one
26
23
195
@CMofKarnataka
CM of Karnataka
25 days
ಸಂವಿಧಾನ ಎಷ್ಟೇ ಒಳ್ಳೆಯದಾಗಿರಲಿ ಅದನ್ನು ಅನುಷ್ಠಾನಗೊಳಿಸುವ ಜನ ಕೆಟ್ಟವರಾಗಿದ್ದರೆ ಪರಿಣಾಮ ಕೆಟ್ಟದ್ದೇ ಆಗುತ್ತದೆ. ಸಂವಿಧಾನ ಎಷ್ಟೇ ಕೆಟ್ಟದಾಗಿದ್ದರೂ ಅದನ್ನು ಅನುಷ್ಠಾನಗೊಳಿಸುವವರು ಒಳ್ಳೆಯವರಾಗಿದ್ದರೆ ಅದರಿಂದ ಒಳ್ಳೆಯದೇ ಆಗುತ್ತದೆ. -ಡಾ.ಬಾಬಾಸಾಹೇಬ್ ಅಂಬೇಡ್ಕರ್ #drbrambedkar #ambedkar
Tweet media one
23
38
300
@CMofKarnataka
CM of Karnataka
26 days
ಕನ್ನಡಕ್ಕಾಗಿ ಕೈ ಎತ್ತು; ನಿನ್ನ ಕೈ ಕಲ್ಪವೃಕ್ಷವಾಗುತ್ತದೆ! ಕನ್ನಡಕ್ಕಾಗಿ ಕೊರಳೆತ್ತು; ಅಲ್ಲಿ ಪಾಂಚಜನ್ಯ ಮೂಡುತ್ತದೆ! ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು ಅದು ಗೋವರ್ಧನಗಿರಿಧಾರಿಯಾಗುತ್ತದೆ. -ರಾಷ್ಟ್ರಕವಿ ಕುವೆಂಪು #Kuvempu #Kuvempuquotes
Tweet media one
19
26
264
@CMofKarnataka
CM of Karnataka
1 month
"ಸಾಮಾಜಿಕ ಸ್ವಾತಂತ್ರ್ಯವನ್ನು ಪಡೆಯದೇ ಹೋದರೆ, ಕಾನೂನಾತ್ಮಕವಾಗಿ ದೊರೆತ ಇತರೆ ಎಲ್ಲಾ ಸ್ವಾತಂತ್ರ್ಯಗಳು ವ್ಯರ್ಥವಾಗುತ್ತವೆ." - ಡಾ.ಬಿ.ಆರ್‌.ಅಂಬೇಡ್ಕರ್‌ #DrBRAmbedkar #Ambedkar #Constitution
Tweet media one
22
31
190
@CMofKarnataka
CM of Karnataka
1 month
"ನಿಮ್ಮ ಮಕ್ಕಳಿಗೆ ಧಾರ್ಮಿಕತೆಯನ್ನು ಬೋಧಿಸಬೇಡಿ. ಅವರು ಮೂಢನಂಬಿಕೆಯ ಗುಲಾಮರಾಗುತ್ತಾರೆ. ಅವರಿಗೆ ಶಿಕ್ಷಣ ಕೊಡಿ, ಗುಲಾಮಗಿರಿಯನ್ನು ಮೆಟ್ಟಿ ನಿಲ್ಲುತ್ತಾರೆ." - ಡಾ.ಬಿ.ಆರ್‌. ಅಂಬೇಡ್ಕರ್‌
Tweet media one
269
133
1K
@CMofKarnataka
CM of Karnataka
1 month
ಪ್ರಜಾಪ್ರಭುತ್ವ ಎಂದರೆ ಕೇವಲ ಆಡಳಿತದ ವಿಧಾನವಲ್ಲ. ಅದೊಂದು ಒಗ್ಗೂಡಿ ಬಾಳುವ ವಿಧಾನ. ಸಮಗ್ರ ಬದುಕಿನ ಅನುಭವ. ಜೊತೆಯಲ್ಲಿರುವ ಮನುಷ್ಯರಿಗೆ ಘನತೆ, ಗೌರವ ನೀಡುವ ಕ್ರಮ. - ಡಾ.ಬಿ.ಆರ್. ಅಂಬೇಡ್ಕರ್‌
Tweet media one
31
42
302
@CMofKarnataka
CM of Karnataka
1 month
“ಮನುಷ್ಯನ ಆದ್ಯ ಕರ್ತವ್ಯವೇ ಮನುಷ್ಯತ್ವವನ್ನು ರಕ್ಷಿಸುವುದು." - ಕುವೆಂಪು #ಅರಿವಿನ_ಸಂದೇಶ #kuvempuquotes #Kuvempu
Tweet media one
30
60
414
@CMofKarnataka
CM of Karnataka
1 month
*ದೇಶದ ಒಳಿತಿಗಾಗಿ ಸಮರ್ಥ ನಾಯಕರನ್ನು ಆರಿಸುವುದು ಮತದಾರರ ಕರ್ತವ್ಯ* ಚುನಾವಣೆ ನೀತಿ ಸಂಹಿತೆ ಭಾಗವಾಗಿ ಡಿಜಿಟಲ್‌ ವಹಿವಾಟಿನ ಮೇಲೂ ನಿಗಾ ಇಡಲಾಗುವುದು. ಉದಾಹರಣೆಗೆ ಯಾವುದೇ ವ್ಯಕ್ತಿ 20 ಜನರ ಖಾತೆಗೆ ತಲಾ ಎರಡು ಸಾವಿರ ಹಣ ವರ್ಗಾವಣೆ ಮಾಡಿದ್ದರೆ ಅದನ್ನು ಸಂಶಯಾಸ್ಪದ ವಹಿವಾಟು ಎಂದು ಪರಿಗಣಿಸಿ ಅದರ ಮೇಲೆ ನಿಗಾ ವಹಿಸಲಾಗುವುದು. ಜೊತೆಗೆ…
Tweet media one
27
10
145
@CMofKarnataka
CM of Karnataka
1 month
*ಅಭ್ಯರ್ಥಿಯ ಪೂರ್ವಪರ ಅರಿತು ಮತ ಚಲಾಯಿಸುವುದು ಮತದಾರನ ಜವಾಬ್ದಾರಿ* ಚುನಾವಣಾ ಆಯೋಗ ಲೋಕಸಭೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ʼನೋ ಯುವರ್‌ ಕ್ಯಾಂಡಿಡೇಟ್‌ʼ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಲಿದೆ. ಅದರಲ್ಲಿ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌ ಸೇರಿದಂತೆ ಎಲ್ಲಾ ಪೂರ್ವಾಪರವನ್ನು ಸಾರ್ವಜನಿಕರು ತಿಳಿದು…
Tweet media one
18
21
82
@CMofKarnataka
CM of Karnataka
1 month
ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳಿಗಾಗಿ ಸುವಿಧಾ ಆ್ಯಪ್ ರೂಪಿಸಲಾಗಿದೆ. ಅದರಲ್ಲಿ ಅಭ್ಯರ್ಥಿಗಳು ಸಭೆ ಸಮಾರಂಭ, ರ‍್ಯಾಲಿಗಳಿಗೆ ಅನುಮತಿ ಕೋರುವುದೂ ಸೇರಿದಂತೆ ಎಲ್ಲಾ ಅರ್ಜಿಗಳನ್ನು ಸಲ್ಲಿಸಬಹುದು. ನಾಮಪತ್ರ ಮತ್ತು ಅಫಿಡವಿಟ್‌ಗಳನ್ನೂ ಆ್ಯಪ್ ಮೂಲಕವೇ ಸಲ್ಲಿಸಲು ಅವಕಾಶವಿದೆ.…
Tweet media one
11
13
102
@CMofKarnataka
CM of Karnataka
1 month
*ಜಾಗೃತ ಮತದಾರ, ಸದೃಢ ಪ್ರಜಾಪ್ರಭುತ್ವ* ಚುನಾವಣಾ ಸಂಬಂಧಿ ದೂರು ನೀಡಲು ಸಿ- ವಿಜಿಲ್‌ ಆ್ಯಪ್ ಇದ್ದು, ಅದರ ಮೂಲಕ ಯಾರು ಬೇಕಾದರು ದೂರು ಸಲ್ಲಿಸಿದರೆ ಆ ಕುರಿತು ತಕ್ಷಣವೇ ಚುನಾವಣಾಧಿಕಾರಿಗಳು ಕ್ರಮ ಜರುಗಿಸಲಿದ್ದಾರೆ. ದಿವ್ಯಾಂಗರ ಅನುಕೂಲಕ್ಕಾಗಿ ಸಕ್ಷಮ್‌ ಆ್ಯಪ್ ರೂಪಿಸಲಾಗಿದೆ. #LokSabhaElections2024 #LokSabhaElections
Tweet media one
7
9
68
@CMofKarnataka
CM of Karnataka
1 month
ಸಂವಿಧಾನ ರಕ್ಷಿಸುವ, ಗೌರವಿಸುವ ನಾಯಕನಿಗಿರಲಿ ನಿಮ್ಮ ಅಮೂಲ್ಯ ಮತ ಲೋಕಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆ ಸಾರ್ವಜನಿಕರು ಯಾವುದೇ ಸಭೆ- ಸಮಾರಂಭ ಅಥವಾ ಕಾರ್ಯಕ್ರಮಗಳನ್ನು ನಡೆಸಿದರೆ ಅದಕ್ಕೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಜೊತೆಗೆ ಅಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆಗಳನ್ನು ಮಾಡಬಾರದು. ರಾಜಕೀಯ ಪಕ್ಷಗಳ ಬಾವುಟ, ಚಿಹ್ನೆಗಳನ್ನು…
Tweet media one
8
14
130
@CMofKarnataka
CM of Karnataka
1 month
ಮಳೆ ಕೊರತೆಯಿಂದಾಗಿ ಈ ವರ್ಷ ನೀರಿನ ಆಕರಗಳೆಲ್ಲವು ಬತ್ತಿ ಹೋಗಿವೆ. ಬಿರು ಬಿಸಿಲಿಗೆ ಬಾಯಾರಿದ ಪ್ರಾಣಿ ಪಕ್ಷಿಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಈ ಮೂಕವೇದನೆಯನ್ನು ಅರ್ಥ ಮಾಡಿಕೊಂಡ ಮಲೆನಾಡಿನ ರೈತರೊಬ್ಬರು ತಮ್ಮ ಸ್ವಂತ ಜಮೀನಿನಲ್ಲಿರುವ ಬೋರ್‌ವೆಲ್‌ನಿಂದ ನೀರೆತ್ತಿ ಬತ್ತಿದ ನದಿಗೆ ಹರಿಸುವ ಮೂಲಕ ಸಹಸ್ರಾರು ವನ್ಯಜೀವಿಗಳಿಗೆ…
Tweet media one
15
34
213
@CMofKarnataka
CM of Karnataka
1 month
ಮಳೆಕೊರತೆಯಿಂದಾಗಿ ರಾಜ್ಯದಲ್ಲಿ ಬಹುತೇಕ ಬೋರ್‌ವೆಲ್‌ಗಳು ಬತ್ತಿಹೋಗಿವೆ, ಬಿಸಿಲಿನ ತಾಪಕ್ಕೆ ನದಿಗಳ ಒಡಲು ಬರಿದಾಗುತ್ತಿದೆ, ಇಂತಹ ಸಂದರ್ಭದಲ್ಲಿ ನೀರಿನ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಅಗತ್ಯಕ್ಕೆ ಬೇಕಾದಷ್ಟೇ ಬಳಸುವ ಮೂಲಕ ಇತರರಿಗೆ ಮಾದರಿಯಾಗೋಣ. ನೀರನ್ನು ಹಿತಮಿತವಾಗಿ ಬಳಸೋಣ, ಜವಾಬ್ದಾರಿಯುತ ಪ್ರಜೆಗಳಾಗೋಣ. #SaveWaterSaveLife
Tweet media one
23
29
174
@CMofKarnataka
CM of Karnataka
1 month
ರಾಜ್ಯದ 28 ಲೋಕಸಭಾ ಸ್ಥಾನಗಳಿಗೆ ಮೊದಲ ಹಂತದಲ್ಲಿ ಏಪ್ರಿಲ್ 26 ಹಾಗೂ ಎರಡನೇ ಹಂತದಲ್ಲಿ ಮೇ 07 ರಂದು ಸಾರ್ವತ್ರಿಕ ಚುನಾವಣೆಗಳು ನಡೆಯಲಿದೆ. ಅಂದು ನಿಮ್ಮೆಲ್ಲಾ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬದಿಗೊತ್ತಿ ತಪ್ಪದೇ ಮತದಾನ ಮಾಡಿ. ನಿಮ್ಮ ಮತ ನಿಮ್ಮ ಹಕ್ಕು.... #LokSabhaElection2024
Tweet media one
26
90
641
@CMofKarnataka
CM of Karnataka
1 month
ನಟನೆಯ ಜೊತೆಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ನಿಷ್ಕಲ್ಮಶ ಮನಸಿನ ನಗುಮೊಗದ ಹುಡುಗ "ಅಪ್ಪು" ವನ್ನು ಅವರ ಜನ್ಮದಿನದಂದು ಪ್ರೀತಿ ಗೌರವದಿಂದ ಸ್ಮರಿಸಿ ನಮಿಸೋಣ. ಪುನೀತ್ ರಾಜ್‍ಕುಮಾರ್ ತೋರಿದ ಅಂತಃಕರಣ ತುಂಬಿದ ಬದುಕಿನ ಹಾದಿ ನಮ್ಮೆಲ್ಲರದ���ಗಲಿ. #PuneethRajkumar
Tweet media one
31
236
1K