Filed my nomination papers as a candidate for the Varanasi Lok Sabha seat. It is an honour to serve the people of this historic seat. With the blessings of the people, there have been remarkable achievements over the last decade. This pace of work will get even faster in the…
ಒಂದು ಪೂರ್ಣ ತತ್ತ್ವಶಾಸ್ತ್ರೀಯ ಮತ್ತು ಪರಿಕಲ್ಪನಾತ್ಮಕ ಚೌಕಟ್ಟನ್ನು ಒದಗಿಸುವ ಅದ್ವೈತ ವೇದಾಂತದ ಮಾರ್ಗದರ್ಶಕರು, ಜಗದ್ಗುರು ಶ್ರೀ ಆದಿಗುರು ಶಂಕರಾಚಾರ್ಯರ ಜಯಂತಿಯ ಶುಭಾಶಯಗಳು.
ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ನೀಡಿದ ಕೊಡುಗೆಯನ್ನು ಸ್ಮರಿಸೋಣ ಹಾಗು ಅದ್ವೈತ ವೇದಾಂತದ ಮೇಲಿನ ಅವರ ಬೋಧನೆಗಳು ಎಲ್ಲರಿಗೂ ಪ್ರೇರಣೆ.
#Shankaracharya
ಜ್ಞಾನ, ಭಕ್ತಿ, ಸಮನ್ವಯದ ವಿಶಿಷ್ಟ ವೇದಾಂತಿ, ವೈಷ್ಣವ ಧರ್ಮದ ತತ್ವಶಾಸ್ತ್ರ ಮತ್ತು ನೀತಿಗಳನ್ನು ಪ್ರತಿಪಾದಿಸಿದ ತತ್ವಜ್ಞಾನಿ ಮತ್ತು ಮಹಾನ್ ಚಿಂತಕರಾದ ಶ್ರೀ ರಾಮಾನುಜಾಚಾರ್ಯರ ಜಯಂತಿಯ ಹಾರ್ದಿಕ ಶುಭಾಶಯಗಳು.
"ವಸುಧೈವ ಕುಟುಂಬಕಂ" ಎಂದು 'ವಿಶ್ವವೇ ಒಂದು ಕುಟುಂಬ' ಎಂಬ ಪರಿಕಲ್ಪನೆಯನ್ನು ಸಾರಿದ ಇವರ ಬೋಧನೆಗಳು ನಮಗೆಲ್ಲರಿಗೂ ಸದಾ ಸ್ಫೂರ್ತಿ.…
ತಾಯಿಯ ಪ್ರೀತಿ ಅಮೂಲ್ಯ. ಅಮ್ಮ ಎಂದರೆ ವಾತ್ಸಲ್ಯದ ಮೂರ್ತಿ. ಮಮತೆಯ ಕಡಲು, ಸ್ವಾಭಿಮಾನದ ಪ್ರತೀಕ. ನನ್ನ ಬದುಕಿನ ಸ್ಫೂರ್ತಿಯಾಗಿರುವ ಎಲ್ಲಾ ತಾಯಂದಿರಿಗೆ ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು.
#HappyMothersDay
ಪರಮಾಣು ವಿಜ್ಞಾನ ಮಾತ್ರವಲ್ಲದೆ ತಂತ್ರಜ್ಞಾನದ ಎಲ್ಲಾ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯನ್ನು ಆಚರಿಸೋಣ. ರಾಷ್ಟ್ರೀಯ ತಂತ್ರಜ್ಞಾನ ದಿನದಂದು, ಸಮೃದ್ಧಿ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ತಂತ್ರಜ್ಞಾನದ ಕ್ರಾಂತಿಕಾರಿ ಶಕ್ತಿಯನ್ನು ಸ್ಮರಿಸೋಣ.
#NationalTechnologyDay
ಬಸವ ಜಯಂತಿಯ ಸಂದರ್ಭದಲ್ಲಿ ನಾನು, ಜಗದ್ಗುರು ಬಸವೇಶ್ವರರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ಆದರ್ಶಗಳು ಕೋಟ್ಯಂತರ ಜನರ ಬದುಕಿಗೆ ಬೆಳಕು ನೀಡಿವೆ. ನ್ಯಾಯಯುತ ಮತ್ತು ಸಮೃದ್ಧ ಸಮಾಜದ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ.
I pay homage to Jagadguru Basaveshwara on the special occasion of Basava Jayanthi. His ideals illuminate millions of lives. We are working towards fulfilling his dreams of a just and prosperous society.
ನಾಡಿನ ಸಮಸ್ತ ಜನತೆಗೆ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯ ಶುಭಾಶಯಗಳು. ಸಮಾಜದ ಪ್ರಗತಿಗೆ ಇವರ ಅಮೂಲ್ಯ ಕೊಡುಗೆಗಳನ್ನು ಸ್ಮರಿಸೋಣ ಮತ್ತು ಅವರ ಆದರ್ಶಗಳನ್ನು ಅನುಕರಿಸಲು ಶ್ರಮಿಸೋಣ. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಧರ್ಮ ನಿಷ್ಠೆ, ಧಾರ್ಮಿಕ ಭಾವನೆಯನ್ನು ಎಲ್ಲರೂ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.
ಮಹಾ ಪರಾಕ್ರಮಿ, ಜಮದಗ್ನಿ ಸುತ ಪರಶುರಾಮ ಜಯಂತಿಯ ಶುಭಾಶಯಗಳು. ನಿಮ್ಮ ಜೀವನವನ್ನು ಸಂತೋಷ, ಶಾಂತಿ ಮತ್ತು ಸಮೃದ್ಧಿಯೊಂದಿಗೆ ಆಶೀರ್ವದಿಸಲಿ. ಪರಶುರಾಮ ದೇವರು ನಮಗೆ ಧೈರ್ಯ, ಶಕ್ತಿ ಮತ್ತು ಜ್ಞಾನವನ್ನು ನೀಡಲಿ ಎಂದು ಹಾರೈಸುತ್ತೇನೆ.
#ParshuramJayanti
12ನೇ ಶತಮಾನದ ಕವಿ, ತತ್ವಜ್ಞಾನಿ, ಸಮಾಜ ಸುಧಾರಕರು, ಶರಣರಲ್ಲಿ ಅಗ್ರಗಣ್ಯರಾದ ಬಸವ ಜಯಂತಿಯ ಹಾರ್ದಿಕ ಶುಭಕಾಮನೆಗಳು. ಈ ಶುಭ ಸಂದರ್ಭವು, ಎಲ್ಲರ ಜೀವನದಲ್ಲಿ ನೀತಿ, ಆದರ್ಶ, ದಯೆ, ಪ್ರಾಮಾಣಿಕತೆಯನ್ನು ತರಲಿ. ಸಾತ್ವಿಕ ಜೀವನ ನಮ್ಮದಾಗಲಿ.
#BasavaJayanti
ಅಕ್ಷಯ ತೃತೀಯ ಶುಭ ದಿನದಂದು, ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಹೊಸ ಯುಗವನ್ನು ಪ್ರಾರಂಭಿಸಲಿ. ನಿಮ್ಮ ಎಲ್ಲಾ ಕನಸುಗಳು ನೆರವೇರಲಿ, ಆ ದೇವರು ಆರೋಗ್ಯ, ಆಯುಸ್ಸು, ಐಶ್ವರ್ಯ ಕೊಟ್ಟು ನಿಮ್ಮ ಮನೆಯವರನ್ನು ಸಂರಕ್ಷಿಸಲಿ ಎಂದು ಮನ ತುಂಬಿ ಹಾರೈಸುತ್ತೇನೆ.
#AkshayaTritiya
ಭಾರತ ಮಾತೆಯ ಹೆಮ್ಮೆಯ ವೀರ ಪುತ್ರ, ಮಾತೃಭೂಮಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾನ್ ವೀರ ಮಹಾರಾಣಾ ಪ್ರತಾಪ್ ಸಿಂಗ್ ಅವರ ಜಯಂತಿಯಂದು ಅನಂತಾನಂತ ಪ್ರಣಾಮಗಳು.
ಅವರ ನಿಸ್ವಾರ್ಥತೆ ಮತ್ತು ದೇಶ ರಕ್ಷಣೆಗಾಗಿ ಮಾಡಿದ ಹೋರಾಟವು ಯಾವಾಗಲೂ ಸ್ಫೂರ್ತಿದಾಯಕ. ಇವರ ರಾಷ್ಟ್ರಭಕ್ತಿಯು ನಮಗೆಲ್ಲರಿಗೂ ಮಾದರಿ.
ದೇಶ ಮತ್ತು ಸಮಾಜಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜ ಸುಧಾರಕರಾದ ಶ್ರೀ ಗೋಪಾಲ ಕೃಷ್ಣ ಗೋಖಲೆ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.
ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯಂತಹ ಸಂಘಟನೆಗಳಲ್ಲಿ ತಮ್ಮ ನಾಯಕತ್ವದ ಮೂಲಕ ಜನಸಾಮಾನ್ಯರನ್ನು ಪ್ರೇರೇಪಿಸಿದ ಇವರು ಸ್ಮರಣೀಯರು.